ಹರಿಯೇ ನೀನು ನಂಬಿದವರ

ಹರಿಯೇ ನೀನು ನಂಬಿದವರ
ಕೈಯ ಬಿಡವನಲ್ಲವೆಂದು |
ತಿಳಿದು ನಾನು ಅಚಲವಾಗಿ ನಿನ್ನ ನಂಬಿರುವೆನು ||
ಏನೇ ಕಷ್ಟ ಬಂದರೂನು
ನಿನ್ನ ನೆನೆದು ನೀಗಿ ಬಿಡುವೆನು||

ಮತ್ತೆ ಮತ್ತೆ ಬಿಡದೆ ನನ್ನಪಾಪ
ಬೆನ್ನ ಹತ್ತಿಬಂದರೂನು ನಿನ್ನ ಜಪಿಸಿ|
ಎಲ್ಲ ಕರ್ಮವನು ಕಳೆಯುವವರೆಗೂ
ನಿನ್ನ ಸ್ತುತಿಸಿ ಮುಂದೆ ಸಾಗುವೆ|
ನಿನ್ನ ಕೃಪೆಯು ಎನ್ನ
ರಕ್ಷಣೆ ಮಾಡಿತೆಂದುಕೊಳ್ಳುವೆ||

ಕರ್ಮಫಲವು ನೀಡಿದೆಲ್ಲವನ್ನೂ
ಮಹಾ ಭಾಗ್ಯವೆಂದುಕೊಳ್ಳುವೆ|
ಯಾವ ಪಿತೃವನು ದೂಷಿಸದೆ
ಕಾಲ ಕರ್ಮವನು ಮಾಡುತಾ
ನಿನ್ನ ಭಜನೆ ಮಾಡುವೆ|
ಬಂದದ್ದನ್ನೆಲ್ಲಾ ಸಹಿಸಿ
ಮುಂದೆ ದಾರಿ ಮಾಡಿಕೊಳ್ಳುವೆ||

ಮಂದಮತಿಯಾದ ಎನ್ನ ಕ್ಷಮಿಸಿ
ತಿದ್ದಿರೂಪಿಸು ಹರಿಯೇ|
ಜನ್ಮ ಜನ್ಮಾಂತರಕೂ ನಿನ್ನನೇ ನೆನೆಯುವೆ
ನಿನಗೆ ನನ್ನ ಅನಂತ ಅನಂತ
ವಂದನೆಯ ಅರ್ಪಿಸುವೆ
ಸ್ವೀಕರಿಸು ಓ ಎನ್ನ ದೊರೆಯೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್
Next post ಸಾವು-ನೋವು

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys